Ode to the west wind

Join Us on WhatsApp

Connect Here

ಸಾಮಾಜಿಕ ಜಾಲತಾಣದಲ್ಲಿ ಚಾರಣ ದೃಶ್ಯ ವೈರಲ್, ಕ್ರಮಕ್ಕೆ ಸೂಚನೆ:

WhatsApp
Facebook
Twitter
LinkedIn

ದಕ್ಷಿಣ ಕನ್ನಡ ಜಿಲ್ಲೆ:

ಕುಕ್ಕೆ ಸುಬ್ರಹ್ಮಣ್ಯ ದೇವರಗದ್ದೆಯ ಕುಮಾರ ಪರ್ವತ ಚಾರಣದ ಚೆಕ್ ಪೋಸ್ಟ್ ಬಳಿ ವಾರಾಂತ್ಯದಲ್ಲಿ ಸಾವಿರಾರು ಜನರು ಟ್ರೆಕ್ಕಿಂಗ್ (ಚಾರಣ)ಗೆ ಬಂದಿರುವ  ದೃಶ್ಯಗಳು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದ್ದವು.

ಪ್ಲಾಸ್ಟಿಕ್, ಕ್ಯಾರಿ ಬ್ಯಾಗ್ ಗಳು, ಬಾಟಲಿಗಳು ಕಾಡಿನಂಚಿನ ರಸ್ತೆಯ ಎರಡೂ ಬದಿ ರಾಶಿ ಬಿದ್ದಿವೆ ಎಂಬ ವರದಿ ಆಘಾತಕಾರಿಯಾಗಿತ್ತು. ಇದನ್ನ ಗಮನಿಸಿರುವ ಅರಣ್ಯ ಹಾಗೂ ಪರಿಸರ ಖಾತೆ ಸಚಿವ ಈಶ್ವರ ಖಂಡ್ರೆ ಕ್ರಮಕ್ಕೆ ಆದೇಶಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ಹೊರಡಿಸಿ,

ಈ ಘಟನೆ ರಾತ್ರಿ ನಮ್ಮ ಗಮನಕ್ಕೆ ಬಂದಿದ್ದು, ವೈರಲ್ ವಿಡಿಯೋದ ಸತ್ಯಾಸತ್ಯತೆ ತಿಳಿಯಲು ಮಡಿಕೇರಿಯ ಉಪ ಅರಣ್ಯ ಸಂರಕ್ಷಣಾಧಿಕಾರಿಯವರಿಗೆ  ಕೂಡಲೇ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚಿಸಲಾಗಿದೆ. ಇನ್ನು ಮುಂದೆ ಹೀಗೆ ಜನ ಜಂಗುಳಿ ಆಗುವುದಿಲ್ಲ.  ಪರಿಸರ ಹಾಗೂ ಅರಣ್ಯ ಉಳಿಸುವ ನಿಟ್ಟಿನಲ್ಲಿ ಚಾರಣಕ್ಕೆ ನಿಯಮಾನುಸಾರ ಸೂಕ್ತ ಕಡಿವಾಣ ಹಾಕಲಾಗುವುದು ಎಂದುಈಶ್ವರ ಖಂಡ್ರೆ ಹೇಳಿದರು.

You Might Also Like This