Ode to the west wind

Join Us on WhatsApp

Connect Here

ರಾಜಾರೋಶವಾಗಿ ಸಂರಕ್ಷಿತ ಅರಣ್ಯದೊಳಗೆ ಅಗಳ ಹೊಡೆದರು..!

WhatsApp
Facebook
Twitter
LinkedIn

ಚಿಕ್ಕಮಗಳೂರು ಭದ್ರಾ ಹಿನ್ನೀರಿನುದ್ದಕ್ಕೂ ಚಾಚಿಕೊಂಡಿರುವ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ವಿನಾಶ ಅವ್ಯಾಹತವಾಗಿ ಸಾಗಿದೆ. ಜಿಲ್ಲೆಯ ಅರಣ್ಯಾಧಿಕಾರಿಗಳ ನಿರಾಸಕ್ತಿಗೆ ಉಳ್ಳವರ ದೌರ್ಜನ್ಯಕ್ಕೆ ಪ್ರಾಕೃತಿಕ ಸಂಪತ್ತು ನಾಶವಾಗುತ್ತಿದೆ. ಭದ್ರಾ ಅಭಯಾರಣ್ಯದೊಳಗಿನ ಸರ್ಕಲ್‌ಗಳ ಆರ್‌ ಎಫ್‌ ಓ ಗಳೇ ಮುಂದೆ ನಿಂತು ವಿನಾಶಕ್ಕೆ ಎಡೆ ಮಾಡಿಕೊಡುತ್ತಿದ್ದಾರೆಂಬ ಅನುಮಾನ ಕಾಡುತ್ತಿದೆ. ಇದಕ್ಕೆ ಇಂಬು ನೀಡುವಂತೆ ಮತ್ತೊಂದು ಘಟನೆಯೊಂದು ನಡೆದಿದೆ.

ಕೊಪ್ಪ ಅರಣ್ಯ ವಿಭಾಗ, ನರಸಿಂಹರಾಜಪುರ, ನೆಲಗದ್ದೆ ಗ್ರಾಮ ಆರಂಬಳ್ಳಿಯ ಸರ್ವೇ ನಂಬರ್‌ ೭೪ರಲ್ಲಿ ಈ ಭಾಗದ ಪ್ರಭಾವಿ ವ್ಯಕ್ತಿಗಳು ರಾಜಾರೋಷವಾಗಿ ಹಿಟಾಚಿ ಬಳಸಿ ನೀರಿನ ಪೈಪ್‌ ಅಳವಡಿಸಿದ್ದಾರೆ. ಹಿಟಾಚಿ ಸಾಗಿರುವ ಉದ್ದಕ್ಕೂ ಕಿರು ಸಂರಕ್ಷಿತ ಅರಣ್ಯದಲ್ಲಿ ಮರ-ಗಿಡಗಳ ನಾಶವಾಗಿದೆ. ಹಲವು ಮರಗಳ ತೊಗಟೆಗಳಿಗೆ ಹಾನಿ ಮಾಡಿದ್ದಾರೆ. ಇಲ್ಲಿ ಕಿಲೋಮೀಟರ್‌ಗಳಷ್ಟು ದೂರ ಅಳವಡಿಸಿರುವ ಪೈಪ್ ಗಳಿಂದ ಭದ್ರಾ ಹಿನ್ನೀರು ಎತ್ತಲಾಗುತ್ತಿದೆ. ಈ ಪ್ರದೇಶವೂ ಸಹ ಮಾನವ ಅತಿಕ್ರಮಣಕ್ಕೆ ನಿಷೇಧಿತ..! ಇಷ್ಟು ರಾಜಾರೋಶವಾಗಿ ಪೈಪ್ ಲೈನ್‌ ಕಾಮಗಾರಿ ಮುಗಿಸಿದರೂ ಸಹ ತಡೆಯದೇ ಫೋಟೋ ವೈರಲ್‌ ಆದ ಬಳಿಕ ಎಚ್ಚೆತ್ತುಕೊಂಡ ಅರಣ್ಯಾಧಿಕಾರಿಗಳು ತರಾತುರಿಯಲ್ಲಿ ಪ್ರಕರಣವನ್ನ ದಾಖಲಿಸಿಕೊಂಡಿದ್ದಾರೆ.

ಈ ಬಗ್ಗೆ ಮಾಹಿತಿ ನೀಡಿದ ಇಲಾಖೆ ಅಧಿಕಾರಿಗಳು, ಬೈರಾಪುರ ಗ್ರಾಮದ ರೇವಂತ್‌ ಗೌಡ ಹಾಗೂಮಂಜುನಾಥ್‌, ಉಂಬ್ಳೇಬೈಲು ಗ್ರಾಮದ ಹರೀಶ್‌ ಹಾಗೂ ಮಂಜುನಾಥ್‌ ಗೌಡ ಎಂಬುವರ ಮೇಲೆ ಪ್ರಕರಣ ದಾಖಲಿಸಿಕೊಂಡಿದ್ದೇವೆ. ಹೆಚ್ಚೇನು ಪೈಪ್ ಗಳನ್ನ ಹಾಕಿಲ್ಲ, ಎಲ್ಲವನ್ನೂ ತೆರವುಗೊಳಿಸಿದ್ದೇವೆ ಎನ್ನುತ್ತಾರೆ. ಈ ಪ್ರಕರಣದಲ್ಲಿ ಸಾಕ್ಷಿಗಳಾಗಿ ಈ ಭಾಗದ ಗಸ್ತು ಅರಣ್ಯ ಪಾಲಕರಾದ ರಜನೀಶ್‌ ಹಾಗೂ ಸಂದೀಪ್‌ ಎಬುವರನ್ನ ಹೆಸರಿಸಿದ್ದಾರೆ. ಈ ಗಸ್ತು ಪಾಲಕರ ಅರಿವಿಗೇ ಬಾರದಂತೆ ಕಾಮಗಾರಿ ಆರಂಭವಾಗಿದೆಯೇ ಅಥವಾ ರಾತ್ರೋರಾತ್ರಿ ಇವರ ಕಣ್ಣು ತಪ್ಪಿಸಿ ಅಗಳ ಹೊಡೆಯಲಾಗಿದೆಯೇ ಎಂಬ ಸಹಜ ಅನುಮಾನ ನಮಗೆ ಮೂಡುತ್ತದೆ.

ಈ ಘಟನೆ ಬಗ್ಗೆ ಅರಣ್ಯ ಸಚಿವ ಈಶ್ವರ ಬಿ. ಖಂಡ್ರೆಯವರಿಗೂ ಮಾಹಿತಿ ಹೋಗಿದ್ದು, ಪ್ರಕರಣವನ್ನ ಗಂಭೀರವಾಗಿ ಪರಿಗಣಿಸಿ, ತನಿಖೆಗೆ ಆದೇಶ ನೀಡದೇ ಹೋದರೆ ಭದ್ರಾ ಸಂರಕ್ಷಿತ ಅರಣ್ಯ ವೇಗವಾಗಿ ವಿನಾಶದತ್ತ ಸಾಗಲಿದೆ.

You Might Also Like This