Ode to the west wind

Join Us on WhatsApp

Connect Here

ಮೂವತ್ತೆಂಟು ವರ್ಷಗಳ ಬಳಿಕ ಶೃಂಗೇರಿ ಮಠಕ್ಕೆ ನೂತನ ಆಡಳಿತಾಧಿಕಾರಿ

WhatsApp
Facebook
Twitter
LinkedIn

ಚಿಕ್ಕಮಗಳೂರು: ದಕ್ಷಿಣಾಮ್ಯ ಶ್ರೀ ಶಾರದಾಪೀಠ, ಶೃಂಗೇರಿ ಮಠಕ್ಕೆ ನೂತನ ಆಡಳಿತಾಧಿಕಾರಿಯಾಗಿ ಪಿ.ಎ. ಮುರುಳಿಯವರನ್ನ ಶೃಂಗೇರಿ ಹಿರಿಯ ಜಗದ್ಗುರು ಭಾರತೀ ತೀರ್ಥ ಶ್ರೀಗಳು ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.

1986 ರಿಂದ 38 ವರ್ಷಗಳಿಂದ ಮಠದ ಆಡಳಿತಾಧಿಕಾರಿಯಾಗಿದ್ದ ಗೌರಿ ಶಂಕರ್ ತಮ್ಮ ಅಧಿಕಾರವನ್ನ ಹಸ್ತಾಂತರ ಮಾಡಲಿದ್ದಾರೆ. 1986 ರಲ್ಲಿ ಶೃಂಗೇರಿ ಜಗದ್ಗುರು ಆಭಿನವ ವಿದ್ಯಾತೀರ್ಥ ಶ್ರೀಗಳಿಂದ ಗೌರಿ ಶಂಕರ್ ನೇಮಕವಾಗಿದ್ದರು. ಇನ್ನು ಮುಂದೆ ಮುರುಳಿ ಅವರಿಗೆ ಮುಖ್ಯ ಸಲಹೆಗಾರರಾಗಿ ಗೌರಿ ಶಂಕರ್ ಮುಂದುವರಿಯಲಿದ್ದಾರೆ.

ಇಷ್ಟು ವರ್ಷ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದ ಗೌರಿ ಶಂಕರ್ ಗೆ ಫೆಬ್ರವರಿ 12 ಕ್ಕೆ ಮಠದಲ್ಲಿ ಅಭಿನಂದನಾ ಸಮಾರಂಭ ಹಮ್ಮಿಕೊಳ್ಳಲಾಗಿದೆ. ಈ ದಿನ ( ಫೆಬ್ರವರಿ 12 ) ಕಿರಿಯ ಶ್ರೀ ವಿಧುಶೇಖರ ಶ್ರೀಗಳು ಸಂನ್ಯಾಸ ಸ್ವೀಕರಿಸಿ 9 ವರ್ಷ ಪೂರ್ಣಗೊಳ್ಳಲಿವೆ.

You Might Also Like This