Ode to the west wind

Join Us on WhatsApp

Connect Here

ಚಿರತೆ ಕಾರ್ಯಾಚರಣೆಗೆ ಬಂದ ಆನೆಗಾಗಿ ಕಬ್ಬು ಕದ್ದರಾ ಅರಣ್ಯ ಸಿಬ್ಬಂದಿ:

WhatsApp
Facebook
Twitter
LinkedIn

ಶಿವಮೊಗ್ಗ ಜಿಲ್ಲೆ ಸಕ್ರೆಬೈಲು ಆನೆ ಬಿಡಾರದಿಂದ ಬೆಳಗಾವಿಗೆ ಆಗಮಿಸಿರುವ 2 ಆನೆಗಳು ಚಿರತೆ ಶೋಧ ಕಾರ್ಯದಲ್ಲಿ ಭಾಗಿಯಾಗಿವೆ. ಆದರೆ ಆನೆಗಳಿಗೆ ಅಹಾರ ನೀಡಲು ಅರಣ್ಯಾಧಿಕಾರಿಗಳು ರೈತನ ಹೊಲದ ಕಬ್ಬನ್ನ ಹೇಳದೇ ಕದ್ದು ತಂದ ಆರೋಪ ಎದುರಾಗಿದೆ. ಅರಣ್ಯ ಸಚಿವ ಉಮೇಶ್ ಕತ್ತಿ ಜಿಲ್ಲೆಯಲ್ಲೇ‌ ಇಂತಹ ‌ಆರೋಪವನ್ನ ರೈತರು ಹೊರಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ  ಬೆಳಗಾವಿ ಸಿಸಿಎಫ್ ಮಂಜುನಾಥ ಚೌವ್ಹಾಣ್, ರೈತನಿಗೆ ಮಾಹಿತಿ ನೀಡದೇ ಕಬ್ಬು ಕಟಾವು ಮಾಡಿಕೊಂಡು ಬಂದಿರುವುದು ಮಾಧ್ಯಮಗಳಿಂದ ಗೊತ್ತಾಗಿದೆ.


ಕಬ್ಬು ಕಟಾವು ಮಾಡಿಕೊಂಡ ಬಂದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಸೂಚಿಸಿದ್ದೇನೆ. ಅಲ್ಲದೇ ರೈತನಿಗೂ ಪರಿಹಾರ ಕೊಡಲು ಕ್ರಮ ವಹಿಸಿದ್ದೇವೆ. ಚಿರತೆ ಶೋಧಕ್ಕೆ ಬೆಳಗಾವಿಗೆ ಬಂದಿರುವ ಗಜಪಡೆಗೆ ಕಬ್ಬು ತರಲಾಗಿತ್ತು. ಆದರೆ ನಮ್ಮ ಸಿಬ್ಬಂದಿ ರೈತನಿಗೆ ಮಾಹಿತಿ ನೀಡದೇ ಕಬ್ಬು ತಂದಿದ್ದಾರೆ ಎಂದರು.

ಒಟ್ಟಿನಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಆನೆಗಳನ್ನ ಎಷ್ಟು ಮುತುವರ್ಜಿ ವಹಿಸುತ್ತಾರೆ ಎಂಬುದು ಈ ಘಟನೆ‌ ವಿವರಿಸುತ್ತೆ.

ವಿಡಿಯೋ ಇಲ್ಲಿದೆ..

You Might Also Like This