ಹಂದಿ ಬೇಟೆಗೆ ಬಳಸುವ ಕಚ್ಚಾ ಬಾಂಬ್ ಮಟೀರಿಯಲ್ಸ್ ಸ್ಫೊಟ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು, ಶಿರಾಳಕೊಪ್ಪ ಬಸ್ ನಿಲ್ದಾಣದ ಸಮೀಪದ ಅಂಗಡಿಯಲ್ಲಿ ಸ್ಫೋಟಕ ವಸ್ತು ಸಿಡಿದು ಓರ್ವ ಗಾಯಗೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಗಾಯಾಳು ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಸ್ಫೋಟಗೊಂಡ ಬ್ಯಾಗ್ ಬದಿಯಲ್ಲಿ ಕುಕ್ಕರ್ ಕೂಡ ಕಂಡಿದ್ದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹೇಳಿಕೆ ನೀಡಿ ಹಂದಿ ಶಿಕಾರಿ ಸ್ಫೋಟಕ ಎಂದಿದ್ದಾರೆ. ದಂಪತಿಗಳು ಹಂದಿ ಬೇಟೆಗೆ ಬಳಸುವ ಸ್ಫೋಟಕ ವಸ್ತುಗಳನ್ನ ಚೀಲದಲ್ಲಿಟ್ಟುಕೊಂಡು ಪರಿಚಯಸ್ಥರರ ಅಂಗಡಿಗೆ ಬಂದರು. ಸಂತೆ ಮಾಡಿಕೊಂಡು ಬರಲು ಚೀಲವನ್ನ ಅಲ್ಲೇ ಬಿಟ್ಟು […]
ಈಸೂರು ದಂಗೆ, ಮಲೆನಾಡಿನ ರೈತಾಪಿ ಜೀವನ ಇಲ್ಲಿ ಮೂಡಿವೆ..!

ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ನಿಸರ್ಗದತ್ತವಾಗಿ ಬಂದ ಪ್ರವಾಸಿ ತಾಣಗಳಿವೆ. ಗಿರಿ ಶಿಖರಗಳು, ನದಿ-ಜಲಪಾತಗಳು, ಜಲಾಶಯಗಳೂ, ವನ್ಯಧಾಮ ಹೀಗೆ ಸಾಲು ಸಾಲು ಅಹ್ಲಾದಕಾರಿ ಸ್ಥಳಗಳಿವೆ. ಆದರೆ ಕೃತಕವಾಗಿ ನಿರ್ಮಿಸಿ, ಉಚಿತ ಪ್ರವೇಶ ನೀಡಿ, ದಿನಕ್ಕೆ ನೂರಾರು ಪ್ರವಾಸಿಗರನ್ನ ಆಕರ್ಷಣೆ ಮಾಡುವ ಸ್ಥಳಗಳು ಮಾತ್ರ ಜಿಲ್ಲೆಯಲ್ಲಷ್ಟೇ ಅಲ್ಲ ರಾಜ್ಯದಲ್ಲೂ ಅಪರೂಪ. ಪ್ರವಾಸೋದ್ಯಮ ಹೆಸರಲ್ಲಿ ನೂರಾರು ಕೋಟಿ ವ್ಯಯಿಸಿ ಪ್ರಾಕೃತಿಕ ಪರಿಸರ ಹಾಳುಗೆಡವಿ ಜನರ ಕೋಪಕ್ಕೆ ಕಾರಣವಾಗುವ ನಿದರ್ಶನಗಳೇ ಅಧಿಕ. ಇಂತಹ ಅವೈಜ್ಞಾನಿಕ ಅಭಿವೃದ್ಧಿಗೆ ಅಣಕವೆಂಬಂತೆ ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ […]