ಸಿಗಂದೂರು ಪ್ರವಾಸಿಗರ ತುರ್ತು ಗಮನಕ್ಕೆ: ಲಾಂಚ್ ವಾಹನಗಳಿಗೆ ನಿಷೇಧ; ಬದಲಿ ಮಾರ್ಗ ವಿವರ ಇಲ್ಲಿದೆ:

ರಾಜ್ಯದ ಪ್ರಸಿದ್ಧ ಪ್ರವಾಸಿ ತಾಣ ಹಾಗೂ ಪುಣ್ಯ ಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸಂಕಷ್ಟ ಎದುರಾಗಿದೆ. ಮಳೆ ಬಾರದೇ, ಬಿಸಿಲ ಝಳಕ್ಕೆ ಶರಾವತಿ ಹಿನ್ನೀರು ದಿನೇ ದಿನೇ ಬತ್ತುತ್ತಿದೆ. ಲಾಂಚ್ ಚಲಾಯಿಸುವುದು ಕಷ್ಟವಾಗಿದೆ. ದ್ವೀಪದ ಜನರಿಗೆ ತೊಂದರೆಯಾಗದಿರಲಿ ಎಂದು ಲಾಂಚ್ಗಳನ್ನ ಜನರಿಗಷ್ಟೇ ಸೀಮಿತಗೊಳಿಸಿದ್ದಾರೆ. ಇಂದಿನಿಂದ ವಾಹನಗಳಿಗೆ ನಿಷೇಧ ಹೇರಲಾಗಿದೆ. ಪ್ರವಾಸಿಗರು ಇಲ್ಲಿಗೆ ಬಂದು ಪರದಾಡುವ ಬದಲು ಬದಲಿ ಮಾರ್ಗ ನೋಡಿಕೊಳ್ಳಬೇಕಿದೆ. ಸಾಗರದಿಂದ ಇಪ್ಪತ್ತೈದು ಕಿಲೋಮೀಟರ್ ಅಂತರದಲ್ಲಿ ಶರಾವತಿ ನದಿ ಮೂವತ್ತು ಸಾವಿರ ಜನರಿರುವ ಹಳ್ಳಿಗಳನ್ನ […]
ಆರು ದಶಕ ನೀರಲ್ಲಿದ್ದರೂ ನಶಿಸದ ಮಡೆನೂರು ಹಿರೇಭಾಸ್ಕರ ಅಣೆಕಟ್ಟು..!

ಬ್ರಿಟೀಷ್ ಇಂಡಿಯಾ ಸಮಯದಲ್ಲಿ ಜಲಾಶಯ, ಅಣೆಕಟ್ಟು, ಒಡ್ಡುಗಳನ್ನ ಹೇಗೆ ನಿರ್ಮಾಣ ಮಾಡುತ್ತಿದ್ದರು ಎಂಬ ಕೌತುಕ ಸಾಕಷ್ಟು ಜನರಲ್ಲಿರುತ್ತೆ. ಇಂದಿನಂತೆ ಕಾಂಕ್ರೀಟ್ ಬಳಸಿ ಕಟ್ಟುತ್ತಿರಲಿಲ್ಲ. ಉದ್ಘಾಟನೆಗೆ ಮುನ್ನವೇ ಉದುರಿ ಬೀಳುತ್ತಲೂ ಇರಲಿಲ್ಲ. ಇಂತಹದೊಂದು ಅದ್ಭುತ ಅಣೆಕಟ್ಟೊಂದು ಆರು ದಶಕಗಳ ಕಾಲ ನೀರಿನಲ್ಲೇ ಮುಳುಗಿದೆ. ಗಟ್ಟುಮುಟ್ಟಾಗಿಯೂ ಇದೆ ಎಂದರೆ ಎಂಥವರಿಗೂ ಅಚ್ಛರಿ ಎನಿಸದೇ ಇರದು. ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಶರಾವತಿ ನದಿಯಲ್ಲಿ ಎಂಟು ದಶಕದ ಅಣೆಕಟ್ಟಿದೆ, ಇದಕ್ಕೆ ಮಡೆನೂರು ಹಿರೇಭಾಸ್ಕರ ಎಂದು ಹೆಸರು. ಶರಾವತಿ ವನ್ಯಜೀವಿ ಸಂರಕ್ಷಿತ ವಲಯದೊಳಗೆ […]