ಹಂದಿ ಬೇಟೆಗೆ ಬಳಸುವ ಕಚ್ಚಾ ಬಾಂಬ್ ಮಟೀರಿಯಲ್ಸ್ ಸ್ಫೊಟ

ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕು, ಶಿರಾಳಕೊಪ್ಪ ಬಸ್ ನಿಲ್ದಾಣದ ಸಮೀಪದ ಅಂಗಡಿಯಲ್ಲಿ ಸ್ಫೋಟಕ ವಸ್ತು ಸಿಡಿದು ಓರ್ವ ಗಾಯಗೊಂಡಿದ್ದಾನೆ. ಸ್ಫೋಟದ ತೀವ್ರತೆಗೆ ಗಾಯಾಳು ಕಾಲುಗಳಿಗೆ ಸುಟ್ಟ ಗಾಯಗಳಾಗಿವೆ. ಸ್ಫೋಟಗೊಂಡ ಬ್ಯಾಗ್ ಬದಿಯಲ್ಲಿ ಕುಕ್ಕರ್ ಕೂಡ ಕಂಡಿದ್ದು ಮಾಧ್ಯಮಗಳಲ್ಲಿ ಸುದ್ದಿ ಬಿತ್ತರವಾಗುತ್ತಿದ್ದಂತೆ ಶಿವಮೊಗ್ಗ ಎಸ್ಪಿ ಮಿಥುನ್ ಕುಮಾರ್ ಹೇಳಿಕೆ ನೀಡಿ ಹಂದಿ ಶಿಕಾರಿ ಸ್ಫೋಟಕ ಎಂದಿದ್ದಾರೆ. ದಂಪತಿಗಳು ಹಂದಿ ಬೇಟೆಗೆ ಬಳಸುವ ಸ್ಫೋಟಕ ವಸ್ತುಗಳನ್ನ ಚೀಲದಲ್ಲಿಟ್ಟುಕೊಂಡು ಪರಿಚಯಸ್ಥರರ ಅಂಗಡಿಗೆ ಬಂದರು. ಸಂತೆ ಮಾಡಿಕೊಂಡು ಬರಲು ಚೀಲವನ್ನ ಅಲ್ಲೇ ಬಿಟ್ಟು […]
ಆನೆಗಳ ಕುರುಹುಗಳೇ ಇಲ್ಲದ ವಲಯಕ್ಕೂ ಆಗಮಿಸುತ್ತಿವೆ ಕಾಡಾನೆಗಳು.

ಶಿಕಾರಿಪುರ: ಹಿಂದೆಂದೂ ಆನೆಗಳ ಇರುವಿಕೆಯೇ ಇರದ ಸ್ಥಳಗಳಲ್ಲೂ ಆನೆಗಳು ಸಂಚರಿಸುತ್ತಿರುವುದು ಮಲೆನಾಡಿನ ರೈತರ ನಿದ್ದೆಗೆಡಿಸಿದೆ. ಎರಡು ಕಾಡಾನೆಗಳು ಮರಿಯೊಂದಿಗೆ ಶಿಕಾರಿಪುರ-ಸಾಗರದಂಚಿನ ಅಂಬ್ಲಿಗೋಳ ( ಅಂಬ್ಳಿಗೋಳ ) ವಲಯ ಅರಣ್ಯ ವ್ಯಾಪ್ತಿಯ ರೈತರ ಹೊಲಗಳಲ್ಲಿ ಹಾವಳಿ ನಡೆಸಿವೆ. ವಿರಳ ಕಾಡು ಪ್ರದೇಶದ ಈ ಹಳ್ಳಿಗಳಲ್ಲಿ ಆನೆ ವಾಸಿಸಬಲ್ಲ ಸಸ್ಯವರ್ಗವೇ ಇಲ್ಲ ಆದರೂ ಸಹ ಮೊದಲ ಸಲ ಇಂತಹ ಜನನಿಬಿಡ ಪ್ರದೇಶಕ್ಕೆ ಆನೆಗಳು ಬಂದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಎರಡು ದಿನಗಳಿಂದ ರಾತ್ರೋರಾತ್ರಿ ಶಿಕಾರಿಪುರ ತಾಲೂಕಿನ ಎರೆಕೊಪ್ಪ, ಗೊಬ್ಬರದ ಹೊಂಡದಿಂದ ಸಾಲೂರುವರೆಗೆ […]
ಮಿಲಿಯನ್ ಮೌಲ್ಯದ ಹೋರಿಗೆ ಬರ್ತ್ ಡೇ..

ಬಯಲುಸೀಮೆಯ ಜಾನಪದ ಕ್ರೀಡೆಗಳು, ಸಂಪ್ರದಾಯಗಳನ್ನ ಒಳಗೊಂಡಿರುವ ಹಾವೇರಿ, ದಾವಣಗೆರೆ ಜಿಲ್ಲೆಯ ಗಡಿಗೆ ಹೊಂದಿಕೊಂಡ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ಹೋರಿ ಬೆದರಿಸುವ ಹಬ್ಬಕ್ಕೆ ಬಹಳ ಪ್ರಸಿದ್ಧಿ ಪಡೆದಿದೆ. ಆಶ್ಚರ್ಯ ಅನಿಸಬಹುದು, ತಮಿಳುನಾಡಿನಿಂದ ಶಿಕಾರಿಪುರಕ್ಕೆ ಬಂದು ಜಲ್ಲಿಕಟ್ಟು ಸ್ಪರ್ಧೆಗೆ ಹೋರಿಗಳನ್ನ ಲಕ್ಷಗಟ್ಟಲೇ ನೀಡಿ ಕೊಂಡೊಯ್ಯುತ್ತಾರೆ. ಅಂತಹದೊಂದು ರೈತಾಪಿ ಕುಟುಂಬಗಳಿರುವ ಹಳ್ಳಿ ಕುಸ್ಕೂರು. ಶಿಕಾರಿಪುರ ಪಟ್ಟಣದಿಂದ ಹತ್ತು ಕಿಲೋಮೀಟರ್ ಅಂತರದಲ್ಲಿ ಸಿಗುವ ಈ ಹಳ್ಳಿಯಲ್ಲಿ ಹಬ್ಬದ ಹೋರಿಗಳೆಂದರೆ ಒಡನಾಡಿಗಳಂತೆ. ರೈತರು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಬ್ಬದ ಹೋರಿಗಳನ್ನ ಬೆಳೆಸುತ್ತಾರೆ. ಅವುಗಳನ್ನ […]