ಭರಚುಕ್ಕಿಯಲ್ಲಿ ಹುಚ್ಚಾಟವಾಡಿದರೆ ಬಸ್ಕಿ, ಹುಷಾರ್.!!

ಕೊಳ್ಳೇಗಾಲ: ತಾಲೂಕಿನ ಶಿವನಮುದ್ರದ ಭರಚುಕ್ಕಿ ಜಲಪಾತ ಭೋರ್ಗರೆದು ಧುಮ್ಮಿಕ್ಕುತ್ತಿದೆ. ಜಲಪಾತದ ವೈಭವವನ್ನು ನೋಡಲು ಪ್ರವಾಸಿಗರ ದಂಡೇ ಆಗಮಿಸುತ್ತಿದೆ. ಜಲಪಾತ ತುತ್ತ ತುದಿಯಲ್ಲಿ ನಿಂತು ಫೋ ಟೋ, ಸೆಲ್ಫಿ ಕ್ಲಿಕ್ಕಿಸಿಕೊಂಡು ಹುಚ್ಚಾಟ ಮೆರೆಯುತ್ತಿದ್ದವರಿಗೆ ಭಾನುವಾರ ಪೊಲೀಸರು ಬಸ್ಕಿ ಹೊಡಿಸಿ ಬಿಸಿ ಮುಟ್ಟಿಸಿದ್ದಾರೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ಅಧಿಕ ಮಳೆ ಯಾಗಿರುವ ಹಿನ್ನಲೆ ಕಾವೇರಿ ಮೈದುಂಬಿ ಹರಿಯುತ್ತಿದೆ. ಸತ್ತೇಗಾಲ ಸಮೀಪವಿರುವ ಶಿವನಸಮುದ್ರ ಗ್ರಾಮದ ಭರಚುಕ್ಕಿ ಜಲಪಾತಕ್ಕೆ ಜೀವ ಕಳೆ ಬಂದಿದ್ದು. ಹಸಿರು ಕಾನನದ ನಡುವೆ ಹಾಲ್ನೊರೆಯಂತೆ ಭರಚುಕ್ಕಿ ಜಲಪಾತ ಧುಮಿಕ್ಕುತ್ತಿದೆ. […]
ಹೆಣ್ಣು ಹುಲಿ ಮೃತ: ಸಾವು ಸ್ವಾಭಾವಿಕ

ಚಾಮರಾಜನಗರ: ವಿಷಯ: ದಿನಾಂಕ: 21-06-2024 ರ ಸಂಜೆ, ಕೊಳ್ಳೇಗಾಲ ವನ್ಯಜೀವಿ ವಲಯದ ಗುಂಡಾಲ್ ಶಾಖೆಯ ಲೊಕ್ಕನಹಳ್ಳಿ ಪಶ್ಚಿಮ ಗಸ್ತಿನ ಬಿ.ಆರ್.ಟಿ. ಹುಲಿ ಸಂರಕ್ಷಿತ ಪ್ರದೇಶದ, ದೊಡ್ಡಸಂಪಿಗೆ ಮೀಸಲು ಅರಣ್ಯದ ಸ್ಥಳೀಯವಾಗಿ ಕರೆಯಲ್ಪಡುವ ಬರಳ್ಳ ಅರಣ್ಯ ಪ್ರದೇಶದಲ್ಲಿ ಅರಣ್ಯ ಸಿಬ್ಬಂದಿಯವರು ಗಸ್ತು ಸಂದರ್ಭದಲ್ಲಿ ಒಂದು ಹುಲಿಯ ಮೃತದೇಹ ಕಂಡುಬಂದಿರುತ್ತದೆ. ಈ ವಿಚಾರವನ್ನು ಭಾರತ ಸರ್ಕಾರದ ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್.ಟಿ.ಸಿ.ಎ.) ರವರ ಎಸ್.ಓ.ಪಿ.ಯ ಅನುಗುಣವಾಗಿ ಅಧಿಕಾರಿಗಳು ಹಾಗೂ ಸಿಬ್ಬಂದಿಯವರು ಕ್ರಮವಹಿಸಿರುತ್ತಾರೆ. ಇದರಂತೆ ದಿನಾಂಕ 22-06-2024 ರಂದು ಸದರಿ […]
ತನ್ನೀರ್ ಕೊಂಬನ್ ಸಾವಿಗೆ ಖಂಡ್ರೆ ಸಂತಾಪ, ಅಧಿಕಾರಿಗಳ ವಿರುದ್ಧ ಪರಿಸರಾಸಕ್ತರು ಕೆಂಡ

ಕೇರಳದಲ್ಲಿ ಸೆರೆ ಹಿಡಿದು ಶುಕ್ರವಾರ ಮಧ್ಯರಾತ್ರಿ ಬಂಡೀಪುರಕ್ಕೆ ಮರಳಿ ತಂದ ತನ್ನೀರ್ ಕೊಂಬನ್ ಎಂಬ ಹೆಸರಿನ ಕಾಡಾನೆಯ ಸಾವಿಗೆ ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ್ ಖಂಡ್ರೆ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಈ ಘಟನೆ ಅತ್ಯಂತ ದುರದೃಷ್ಟಕರ ಎಂದ ಸಚಿವರು, ವನ್ಯಜೀವಿಗಳ ಹಿತದೃಷ್ಟಿಯಿಂದ ಯಾವುದೇ ವನ್ಯಜೀವಿಯನ್ನು ಇಂತಹ ರಾಜ್ಯಕ್ಕೆ ಸೇರಿದ್ದು ಎಂದು ಸೀಮಿತಗೊಳಿಸುವುದು ಸರಿ ಅಲ್ಲ ಎಂದು ಹೇಳಿದ್ದಾರೆ. ಅರಣ್ಯ ವನ್ಯಜೀವಿಗಳ ಆವಾಸಸ್ಥಾನವಾಗಿದೆ. ವನ್ಯ ಜೀವಿಗಳು ಅಲ್ಲಿ ಸ್ವಚ್ಛಂದವಾಗಿ ವಿಹರಿಸುತ್ತವೆ. ಆನೆಗಳು ಕೂಡ ತಮಿಳುನಾಡು, ಕೇರಳ, […]
ಯಾರಿಗೆ ಗೊತ್ತು ಕಾಡಾನೆ ದೇವರಿಗೆ ನಮಿಸಲು ಬಂದಿರಬಹುದು.

ಹಿರಿಯ ಪತ್ರಕರ್ತ, ವಿಶ್ವವಾಣಿ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಫೇಸ್ ಬುಕ್ ಪೋಸ್ಟ್, ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಪ್ರಸಿದ್ಧ ಹಿಮವದ್ ಗೋಪಾಲಸ್ವಾಮಿ ಬೆಟ್ಟಕ್ಕೆ ನಿನ್ನೆ ಹೋಗಿದ್ದೆ. ಆಶ್ಚರ್ಯ, ಕಾಡಾನೆಯೊಂದು ದೇವಸ್ಥಾನಕ್ಕೆ ಆಗಮಿಸಿತು. ಆಗ ಸಾಯಂಕಾಲ ಆರು ಗಂಟೆ ಸಮಯ. ಭಕ್ತರು ಯಾರೂ ಇರಲಿಲ್ಲ. ನಾವೇ ನಾಲ್ಕು ಮಂದಿ. ಮಂದಿರದ ಬಾಗಿಲು ಹಾಕುವ ಸಮಯ. ಆ ಕಾಡಾನೆ ಬಾಗಿಲು ಮುರಿದು ಒಳ ನುಗ್ಗಿದರೆ ಏನು ಗತಿ ಎಂದು ಗಾಬರಿಯಾಗಿದ್ದೆ. ನನ್ನ ಸ್ನೇಹಿತರೊಬ್ಬರು ದೇವಾಲಯದ ಒಳಗಿದ್ದರು. ನಾನು ಹೊರಗಿದ್ದೆ. […]
ನಾಯಿ ಮುಖವಿರುವ ಹುಲಿ ಕಂಡು ಬೆಚ್ಚಿದ ಜನ

ಬೆಳೆಯನ್ನು ರಕ್ಷಿಸಿಕೊಳ್ಳುವ ಸಲುವಾಗಿ ರೈತರು ಬಳಿದಿರುವ ಹುಲಿ ಬಣ್ಣದ ಪಟ್ಟಿಯ ನಾಯಿ ಹನೂರು – ಅಜ್ಜೀಪುರ ಮಾರ್ಗದಲ್ಲಿ ಸಂಚರಿಸಿಸುತ್ತಿತ್ತು. ಇದನ್ನ ಕಂಡ ಸಾರ್ವಜನಿಕರು ಭಯಭೀತರಾಗಿದ್ದರು. ಇದು ಆತಂಕವನ್ನು ಉಂಟು ಮಾಡಿತ್ತು. ಅಜ್ಜೀಪುರ ಗ್ರಾಮದ ಅರಣ್ಯದಂಚಿನಲ್ಲಿ ಕೆಲ ರೈತರು ಜಮೀನನ್ನು ಹೊಂದಿದ್ದರು. ಆಗ್ಗಾಗ್ಗೆ ಕೋತಿಗಳು ಲಗ್ಗೆ ಇಟ್ಟು ಫಸಲನ್ನು ಹಾಳು ಮಾಡುತ್ತಿದ್ದವು. ಇದರಿಂದ ರೈತರು ರೋಸಿ ಹೋಗಿದ್ದರು. ಕೋತಿಗಳ ಹಾವಳಿಯನ್ನು ತಡೆಗಟ್ಟುವ ಉದ್ಧೇಶದಿಂದ ರೈತರು ತಮ್ಮ ಕೈಚಳಕವನ್ನು ತೋರಿಸಿದ್ದು, ನಾಯಿಯೊಂದಕ್ಕೆ ಹುಲಿ ಪಟ್ಟಿಯನ್ನು ಬಣ್ಣದಿಂದ ಬಳಿದು ಸಂಚರಿಸಲು ಬಿಟ್ಟಿದ್ದಾರೆ. […]