ಪ್ರವಾಸಿಗರ ಹುಚ್ಚಾಟ, ಆನೆಯಿಂದ ಬಿದ್ದ ಕಾವಾಡಿ, ಸಕ್ರೆಬೈಲ್ ಸರ್ಕಸ್ ಕಂಪನಿ ಆಗುತ್ತಿದೆಯೇ..?

ಶಿವಮೊಗ್ಗ: ಶಿವಮೊಗ್ಗದಿಂದ ಹದಿನೈದು ಕಿಲೋಮೀಟರ್ ಕ್ರಮಿಸಿದರೆ ಸಿಗುವ ಸಕ್ರೆಬೈಲು ಆನೆ ಬಿಡಾರ ಮಲೆನಾಡಿನ ಪ್ರಸಿದ್ಧ ಪ್ರವಾಸಿ ತಾಣ. ನಾನಾ ಕಾರಣಗಳಿಂದ ಸದಾ ಸುದ್ದಿಯಲ್ಲಿರುತ್ತೆ. ಇತ್ತೀಚೆಗಷ್ಟೇ ಇಲ್ಲಿನ ಹೊಣೆಗೇಡಿ ವೈದ್ಯನೊಬ್ಬ ಗರ್ಭಿಣಿ ಆನೆಯನ್ನ ದಸರಾ ಮೆರವಣಿಗೆ ಅಣಿಗೊಳಿಸಿ ಪರಿಸರವಾದಿಗಳ ಕೆಂಗಣ್ಣಿಗೆ ಗುರಿಯಾಗಿದ್ದರು. ಆನೆ ಅಂಬಾರಿ ಹೊರುವ ಮುನ್ನಾ ದಿನ ಮರಿ ಹಾಕಿದರೂ ಅರಣ್ಯ ಇಲಾಖೆಯೊಳಗಿನ ಪ್ರಾಬಲ್ಯದಿಂದ ಈ ವೈದ್ಯ ಇನ್ನೂ ಉಳಿದುಕೊಂಡಿದ್ದಾನೆ. ಇದೇ ಕ್ಯಾಂಪಿನ ಇನ್ನೊಂದು ಗರ್ಭಿಣಿ ಆನೆಯ ಬಾಲವನ್ನ ಬಿಡಾರದ ಒಳಗೋ-ಹೊರಗೋ ಇರುವ ಕಿಡಿಗೇಡಿಗಳು ಅರ್ಧ ತುಂಡರಿಸಿದ್ದರು. […]