Ode to the west wind

Join Us on WhatsApp

Connect Here

ಮರಿಗಳನ್ನ ಅರಸಿ ಬಂದ ಚಿರತೆ ಸೆರೆ

WhatsApp
Facebook
Twitter
LinkedIn

ಮೈಸೂರು:

ಕಬ್ಬು ಕಟಾವು ಮಾಡುವ ವೇಳೆ ಪತ್ತೆಯಾಗಿದ್ದ 3 ಚಿರತೆ ಮರಿಗಳನ್ನು ಬೋನಿ‌ನಲ್ಲಿಟ್ಟು ತಾಯಿ ಚಿರತೆಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಯಶಸ್ವಿಗೊಳಿಸಿದ ಅರಣ್ಯ ಇಲಾಖೆ ಸಿಬ್ಬಂದಿ.

ಮೈಸೂರು ತಾಲೂಕಿನ ಮಾರಶೆಟ್ಟಿಹಳ್ಳಿ ಗ್ರಾಮದ ಬಸವಣ್ಣ ಎಂಬುವರ ಜಮೀನಿನಲ್ಲಿ ಕಬ್ಬು ಕಟಾವು ಮಾಡುವ ವೇಳೆ 3 ಚಿರತೆ ಮರಿಗಳು ಪತ್ತೆಯಾಗಿದ್ದವು. ಇಲಾಖೆ ಸಿಬ್ಬಂದಿ ಕೂಡಲೇ ಈ ವಿಷಯವನ್ನ ಅರಣ್ಯ ಇಲಾಖೆ ಗಮನಕ್ಕೆ ತಂದರು.

ಸ್ಥಳಕ್ಕೆ ಆಗಮಿಸಿದ ಅರಣ್ಯ ಇಲಾಖೆ ಸಿಬ್ಬಂದಿ ಮೂರು ಮರಿಗಳನ್ನು ಬೋನಿನಲ್ಲಿರಿಸಿ ತಾಯಿ ಚಿರತೆ ಸೆರೆಗೆ ಕಾರ್ಯಾಚರಣೆ ನಡೆಸಿದ್ದರು.

ಮರಿಗಳನ್ನು ಹುಡುಕಿಕೊಂಡು ಬಂದ ತಾಯಿ ಚಿರತೆ ಬೋನಿಗೆ ಬಿದ್ದು ಸೆರೆಯಾಗಿದೆ.  ತಾಯಿ ಹಾಗೂ ಮರಿ ಚಿರತೆಗಳನ್ನು ಸುರಕ್ಷಿತ ಪ್ರದೇಶದಲ್ಲಿ ಬಿಡಲಾಗಿದ್ದು, ತಾಯಿ ಚಿರತೆ ಸೆರೆಯಿಂದ ಗ್ರಾಮಸ್ಥರು ನಿರಾಳರಾಗಿದ್ದಾರೆ.

You Might Also Like This